Thursday, September 14, 2017

ಮೊಬೈಲಿನ ಪಕ್ಕಾಸಿಗೆ ಸಿಕ್ಕಿಸಿದ ಸರಿಗೆಯ ಕೊಕ್ಕೆ.

💈🏮💈🏮💈🏮💈🏮💈


ಮೊಬೈಲಿನ ಪಕ್ಕಾಸಿಗೆ ಸಿಕ್ಕಿಸಿದ ಸರಿಗೆಯ ಕೊಕ್ಕೆ.


💈🏮💈🏮💈🏮💈🏮💈

14/09/2017


ಒಂದನೇ ಕ್ಲಾಸಿನಲ್ಲಿ ಒಂದು ಎರಡು ಬರೆಯಲು ಸುಲಭ ಆಗುವಂತೆ ಹಾಕಿದ ಗೆರೆಯಂತೆ ಜೋಡಿಸಿದ ಮನೆಯ ಗೋಡೆಯ ಮೇಲಿನ ಪಕ್ಕಾಸು ಮತ್ತು ರೀಪು.

ಆ ಪಕ್ಕಾಸು ರೀಪುಗಳ ಮೇಲೆ,

ನಮ್ಮ ಪರಶುರಾಮ ಸೃಷ್ಟಿಯ ನೆಲದ ಮಣ್ಣಿನಿಂದ ತಯಾರಿಸಿದ ಹಂಚು.


ಈ ಪಕ್ಕಾಸಿನ ಒಂದು ತುದಿಯಲ್ಲಿ ಒಂದು ಕೊಕ್ಕೆಯಾಗಿ ಸಿಕ್ಕಿಸಿದ ಸರಿಗೆ.

ಆ ಕೊಕ್ಕೆಯ ಹೊಟ್ಟೆ ತುಂಬಾ ನೇತಾಡಿಕೊಂಡಿರುವ ಆಮಂತ್ರಣ ಪತ್ರಿಕೆಗಳು.


ಮದುವೆ, ಸೀಮಂತ, ನಾಮಕರಣ, ಉಪನಯನ, ಮಾತ್ರವಲ್ಲದೇ ಸತ್ತವರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯೂ ಆ ಕೊಕ್ಕೆಯಲ್ಲೇ ಜೀವಂತವಾಗಿ ನೇತಾಡುತ್ತಿರುತ್ತದೆ.

ಈ ರೀತಿಯಲ್ಲೊಂದು ಆಮಂತ್ರಣ ಪತ್ರಿಕೆಯನ್ನು ತೆಗೆದಿಡುವ ಪ್ರೀತಿಯೊಂದು ಇತ್ತು.

ಈಗ ಏನಿದ್ದರೂ ಸಾಫ್ಟ್ ಯುಗ.
ಎಲ್ಲವೂ ಸಾಫ್ಟ್ ಕಾಪಿಯಲ್ಲೇ ಮುಗಿದು ಹೋಗುತ್ತದೆ.

ಅದೆಷ್ಟೋ ಆಮಂತ್ರಣ ಪತ್ರಿಕೆಗಳು ಕೇವಲ ವ್ಹಾಟ್ಸಾಪ್, ಫೇಸ್ ಬುಕ್ಕ್, ಟೆಲಿಗ್ರಾಂ, ಜಿಮೇಲ್ ನಲ್ಲಿ ಬಂದು ಸೇರುತ್ತದೆ, ಡಿಲೀಟಾಗಿ ಹೋಗುತ್ತದೆ.


ಯಾವುದೇ ತಾಳಮದ್ದಳೆ ಕೈಗೇ ಸಿಗದೆ ಹಾಗೇ ಹರಿದು ಹೋಗುವ ಹಾಗಾಗಬಾರದು, ಅದೊಂದು ದಾಖಲಾಗಿ ಉಳಿಯಬೇಕೆನ್ನುವ ಉದ್ದೇಶದಿಂದ ಹುಟ್ಟಿದ ರೆಕಾರ್ಡಿಂಗ್ ಮೇಳ. ಅಲ್ಲಿ ರೆಕಾರ್ಡ್ ಆಗುವ ತಾಳಮದ್ದಳೆಗಳ ಆಮಂತ್ರಣ ಪತ್ರಿಕೆಗಳು ದಾಖಲೀಕರಣಕ್ಕಾಗಿ ತೆಗೆದಿಡುವಲ್ಲಿ ಹುಡುಕುವಾ ಅಂದರೆ ಮತ್ತೆ ಅದು ಸಿಗದೇ ಒದ್ದಾಡುತ್ತಿದ್ದೆವು.

ಈ ಸಮಸ್ಯೆಯನ್ನು ಗಮನಿಸುತ್ತಿದ್ದ ನಮ್ಮ ರೆಕಾರ್ಡಿಂಗ್ ಮೇಳದವರೇ ಆದ ಈ ರಂಜನ್ ಹೊಳ್ಳರು ಸುರತ್ಕಲ್ ಇವರು ರೆಕಾರ್ಡಿಂಗ್ ಮೇಳದ ಈ ಸಮಸ್ಯೆಯಿಂದಲೇ ಪ್ರೇರಣೆಗೊಂಡು ಅದಕ್ಕೊಂದು ಪರಿಹಾರವನ್ನು ಕಂಡುಕೊಂಡ ಪರಿ ಇದು.


ಈ ಎಲ್ಲಾ ಆಮಂತ್ರಣ ಪತ್ರಿಕೆಗಳನ್ನು ಒಂದು ಸರಿಗೆಯ ಕೊಕ್ಕೆಯಲ್ಲಿ ಸಿಕ್ಕಿಸಿಡಬೇಕೆಂದು ಯೋಚನೆ ಮಾಡಿದ ಇವರು, ತನ್ನ ಮೊಬೈಲಿನ ಪಕ್ಕಾಸಿಗೇ ಒಂದು ಸರಿಗೆಯ ಕೊಕ್ಕೆಯನ್ನು ಸಿಕ್ಕಿಸಿಕೊಂಡಿದ್ದಾರೆ.


ರಂಜನ್ ಹೊಳ್ಳ ಸುರತ್ಕಲ್ ಇವರು ಯಕ್ಷಗಾನ ಮತ್ತು ತಾಳಮದ್ದಳೆಗೆ ಸಂಬಂಧ ಪಟ್ಟ ಯಾವುದೇ ಆಮಂತ್ರಣ ಪತ್ರಿಕೆ ಬಂದರೆ ಅದನ್ನು ಒಂದು ಕಡೆ ಶೇಖರಣೆ ಮಾಡಿಡುತ್ತಿದ್ದಾರೆ.

ಟೆಲಿಗ್ರಾಂನಲ್ಲೊಂದು ಒಬ್ಬರೇ ಇರುವ ಗ್ರೂಪ್ ಮಾಡಿಕೊಂಡು, ಬೇರೆ ಬೇರೆ ಯಕ್ಷಗಾನ ಗ್ರೂಪಿನಲ್ಲಿ ಬರುವ ಆಮಂತ್ರಣ ಪತ್ರಿಕೆಗಳನ್ನು ತನ್ನ ಗ್ರೂಪಿಗೆ ಫಾರ್ವರ್ಡ್ ಮಾಡಿಕೊಂಡು ಶೇಖರಣೆ ಮಾಡುತ್ತಾ ಬರುತ್ತಿದ್ದಾರೆ.

ಯಾರಿಗಾದರೂ ಯಾವುದಾದರೂ ಆಮಂತ್ರಣ ಪತ್ರಿಕೆ ಮತ್ತೊಮ್ಮೆ ಬೇಕೆಂದರೆ ಇವರನ್ನು ಸಂಪರ್ಕಿಸಬಹುದು.

ರಂಜನ್ ಹೊಳ್ಳ ಸುರತ್ಕಲ್ ಇವರ ಫೋನ್ ನಂಬರ್ 8880277121.


ನಿಮ್ಮ ಕೈಗೆ ಸಿಕ್ಕ ಯಕ್ಷಗಾನಕ್ಕೆ ಸಂಬಂಧಪಟ್ಟ ಆಮಂತ್ರಣ ಪತ್ರಿಕೆಗಳನ್ನು ಇವರ ನಂಬರಿಗೆ ಕಳುಹಿಸಿಕೊಡಿ.


ಯಾರದ್ದೋ ಪಕ್ಕಾಸಿನಲ್ಲಿ ನೇತಾಡುತ್ತಿರುವ, ಯಾರದ್ದೋ ಗೋಡೆಗೆ ಅಂಟಿಸಿರುವ, ಮರದಲ್ಲೋ, ಕರೆಂಟ್ ಕಂಬದಲ್ಲೋ ಇರುವ ಆಮಂತ್ರಣ ಪತ್ರಿಕೆಯ ಫೋಟೋ ತೆಗೆದಾದರೂ ರಂಜನ್ ಹೊಳ್ಳ ಸುರತ್ಕಲ್ ಇವರಿಗೆ ಕಳುಹಿಸಿಕೊಂಡಿ.

🔵ಸುಧಕಾರ ಜೈನ್ ಹೊಸಬೆಟ್ಟು ಗುತ್ತು.


🚦🔹🚦🔹🚦🔹🚦🔹🚦🔹🚦

No comments:

Post a Comment